Showing posts with label Udayavani. Show all posts
Showing posts with label Udayavani. Show all posts

Wednesday, August 26, 2009

Update 24.08.2009





ಕನ್ನಡ ಚಿತ್ರ ರಂಗದಿಂದ ಸಮ್ಮಾನ
Sandalwood chants ‘no piracy’ mantra












Sunday, July 12, 2009

ಉದಯವಾಣಿ ಅವಲೋಕನ...


06 ಜುಲೈ ವಿ ಎಸ್ ಆಚಾರ್ಯರ ಜನ್ಮ ದಿನ...
ಉದಯವಾಣಿ ಹೊರ ತಂದ ವಿಶೇಷ ಲೇಖನ...

Friday, May 1, 2009

ಧನ್ಯವಾದಗಳು...

ಹೆಚ್ಹಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದ ಎಲ್ಲ ಬಂಧುಗಳಿಗೆ, ಶಾಂತಿಯುತಮತದಾನ ಆಗಲು ರಾತ್ರಿ ಹಗಲು ಶ್ರಮಿಸಿದ ಎಲ್ಲ ಭದ್ರತಾ ಸಿಬಂದಿಗೆ, ಚುನಾವಣಾ ಸಿಬಂದಿಗೆ, ಪ್ರಜಾ ಪ್ರಭುತ್ವದ ಮೇಲೆ ನಂಬಿಕೆ ಇರುವ ಎಲ್ಲರಿಗೆ ಧನ್ಯವಾದಗಳು...
ಪ್ರಜಾ ಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಸಿದ್ದಾಂತ ನಂಬಿರುವ ಎಡ ಪಂಥದ ಜನಕ್ಕೆ, ನಾಡಲ್ಲಿರುವ ಅವರ ಬೆಂಬಲಿಗರಿಗೆ, ಪ್ರಚಾರಕರಿಗೆ ಜನರು ಸ್ಪಷ್ಟ ಸಂದೇಶ ನೀಡಿ ತಿರಸ್ಕರಿಸಿದ್ದಾರೆ!
Acharya visits 19 sensitive booths without escort

Wednesday, February 4, 2009

Debate: Pub? Media? NCW? Politically sponsored drama?

ಆಯೋಗದ ತನಿಖೆ ಜಾಡು ತಪ್ಪಿಸುತ್ತಿರುವ ರೇಣುಕ ಎಂದು ಯಾವ ಬುದ್ದಿ ಜೀವಿಯೂ ಸೊಲ್ಲು ಎತ್ತುತ್ತಿಲ್ಲ ಏಕೆ?
ಬೇಳೂರು ಬರೆಯುತ್ತಾರೆ...(ಮೇಲಿನ ಚಿತ್ರ ಕ್ಲಿಕ್ ಮಾಡಿ)

ಕನ್ನಡಪ್ರಭ ಸಂಪಾದಕೀಯ...


Mangalore: The bastion of black mail journalism!



Who sold this photo to Outlook?
(Feb 9,2009 issue),
Who is now blackmailing the families of these "victims" of Mangalore pub "attack"? using this photograph??
(photo courtesy: outlook)
Was it all pre planned with the involvement of the accused/"victims"/mediamen...all for media hype?
If not, why no complaint has been lodged by the "victims",
neither with police nor with NCW?



ಅಮ್ನೆಸಿಯ ಪಬ್ ಅಲ್ಲ...ಇದು ಸೋಶಿಯಲ್ ಅಮ್ನೆಸಿಯ!
ಅನ್ನುತ್ತಾರೆ ದೇವು ಹನೇಹಳ್ಳಿ
Breaking news was more important than saving the girls!
Media under the scanner for its irresponsible behaviour...girls physically assaulted once, but repeated mental assault, by repeat telecast of video clips, bought for a price from Mangalore mediamen...
Will the centre keep on sending "fact finding missions" till they get a "favourble"story? Who pays for all these? Tax payer, of course!



ರಾಮ ಸೇನೆ ಕಾಂಗ್ರೆಸ್ಸ್ ಬಾಲಂಗೋಚಿ...




ರೇಣುಕಾ ಚೌಧರಿ ಯಾರು? ನಿರ್ಮಲ ಪ್ರಶ್ನೆ!



ಗಿರಿಜಾ ವ್ಯಾಸ್ ಗೆ ಏನು ವಿಷಯ ಗೊತ್ತಿಲ್ಲ...ಇಬ್ಬರು ಕಾಂಗ್ರೆಸ್ಸ್ ಮಹಿಳಾ ಮಣಿಗಳ ಸಮರ ತಾರಕಕ್ಕೆ!




ಮಂಗಳೂರಿನ ಮಹಿಳೆಯರಿಗೆ ಮಾಧ್ಯಮಗಳ "ಮದ್ಯ" ಸ್ತಿಕೆ!



ಮುರೂರು ವಿನಾಯಕ ಭಟ್ ಲೇಖನ...



ಮಂಗಳೂರಿನ ನಾಡ ನಕ್ಸಲ ಕಾಲೇಜ್ ಶಿಕ್ಷಕ ಒಬ್ಬರ ಜನ್ಮ ಜಾಲಾಡಿದ್ದಾರೆ!

Thursday, September 25, 2008

ದೆಹಲಿ ಸ್ಪೋಟ...ಕರ್ನಾಟಕದ ಹಾಗು ದೆಹಲಿಯ ಕಾಂಗ್ರೆಸ್ಸ್ ನಾಯಕರಿಗೆ ಒಂದು ಪ್ರಶ್ನೆ?

ಕೇಂದ್ರದ ಗುಪ್ತಚರ ವಿಭಾಗದ ವೈಫಲ್ಯವೇ?
ಅಥವಾ ತುಷ್ಟಿಕರಣದ ಫಲವೇ?

Thursday, September 18, 2008

"Visits by outside leaders causing more tension in Mangalore"

busy calculating...

Mangalore: violence tourism destination for "Intellectuals", Jobless Politicians, self proclaimed human rights activists?
an analysis by Manohar Prasad, Udayavani

ಮಂಗಳೂರು, ಸೆ. 17: ದ.ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದ ಭಾನುವಾರದ ಅನಪೇಕ್ಷಿತ ಘಟನೆಯೊಂದರ ಗಾಯ ವನ್ನು ಜನಮಾನಸ ಮರೆಯಲು ಯತ್ನಿಸುತ್ತಿದೆ. ಆದರೆ, ಈ ಗಾಯವನ್ನು ಮತ್ತೆ ಮತ್ತೆ ಕೆದಕುವ ಪ್ರಯತ್ನ ನಡೆಯುತ್ತಿರುವಂತೆ ಕಳೆದ ಎರಡು ದಿನಗಳ ಬೆಳವಣಿಗೆಗಳಿವೆ.

ಮಂಗಳೂರು ಮತ್ತದರ ಹೊರವಲಯಗಳಲ್ಲಿ ಭಾನುವಾರ ಮತ್ತು ಸೋಮವಾರ ಹಿಂಸಾಚಾರದ ಘಟನೆಗಳ ಸರಣಿ ಸಂಭವಿಸಿತು. ಉಡುಪಿ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಲ್ಲಿಯೂ ಕ್ರೈಸ್ತರ ಪ್ರಾರ್ಥನಾ ಮಂದಿರಗಳಿಗೆ ದಾಳಿ ನಡೆಸಲಾಗಿತ್ತು. ಬಳಿಕ ಕ್ರೈಸ್ತ ಸಂಘಟನೆಗಳ ಭಾರೀ ಪ್ರತಿಭಟನೆ ಮಂಗಳೂರು ಮತ್ತು ಪರಿಸರದಲ್ಲಿ ಸಂಭವಿಸಿತು.
ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯಗಳಲ್ಲಿಯೂ ಕೆಲವು ಪ್ರಕರಣ ವರದಿಯಾದವು. ಬಿ.ಸಿ. ರೋಡ್, ಕಲ್ಲಡ್ಕದಲ್ಲಿ ಪ್ರಕರಣದ ಸಂದರ್ಭವು ಬೇರೆ ತಿರುವುಗಳನ್ನು ಪಡೆದು ಕೊಂಡಿತು. ಇಂತಹ ಒಂದು ತಿರುವು ಮಂಗಳವಾರದ ಬಂದ್‌ಗೆ ಕಾರಣವಾಯಿತು.

ಏನಿದ್ದರೂ, ಬುಧವಾರ ಮಂಗಳೂರು ಸಹಿತ ದ.ಕನ್ನಡ ಜಿಲ್ಲೆ ವಸ್ತುಶಃ ಯಥಾಸ್ಥಿತಿಗೆ ಮರಳಿದೆ. ದಾಳಿ ಮತ್ತು ಪ್ರತಿಭಟನೆ ಇವೆರಡರ ಜತೆಯಲ್ಲಿ ಭುಗಿಲೆದ್ದ ಹಿಂಸಾಚಾರಗಳ ಬಗ್ಗೆ ಆತ್ಮಾವಲೋಕನಕ್ಕೆ ಇದು ಸರಿಯಾದ ಸಂದರ್ಭವಾಗಿತ್ತು.

ಆದರೆ, ಕಳೆದೆರಡು ದಿನಗಳಲ್ಲಿ ಇಲ್ಲಿ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ.

ಭಾವನಾತ್ಮಕ ಹಾನಿ
ಸೌಹಾರ್ದ ಮತ್ತು ಸಾಮರಸ್ಯಕ್ಕೆ ಜಿಲ್ಲೆಯ ಪರಂಪರೆ ಅನನ್ಯವಾಗಿದೆ. ಹಾಗೆಂದು, ಇಲ್ಲಿ ಮತೀಯ ಘರ್ಷಣೆಗಳು ನಡೆದಿಲ್ಲವೆಂದಲ್ಲ. ಹಿಂಸಾತ್ಮಕ ಪ್ರಕರಣಗಳು ಸಂಭವಿಸಿಲ್ಲ ಎಂದಲ್ಲ. ಅಂತಹ ದುರದೃಷ್ಟಕರ ಪ್ರಸಂಗಗಳ ಸಂದರ್ಭದಲ್ಲಿ ಇಲ್ಲಿಯ ಜನತೆ ಶಾಂತಿಗಾಗಿ ಶ್ರಮಿಸಿದ್ದಾರೆ; ಯಶಸ್ವಿಯಾಗಿದ್ದಾರೆ.

ಆದರೆ, ಈ ಬಾರಿಯ ಪ್ರಸಂಗ ಸಂಪೂರ್ಣ ಭಿನ್ನವಾಗಿತ್ತು. ಒಂದೆರಡು ಅವಾಸ್ತವಿಕ ತಿಳುವಳಿಕೆಯು ಸ್ಫೋಟಕ ಪರಿಸ್ಥಿತಿಗೆ ಕಾರಣವಾಯಿತು. ಅದೃಷ್ಟವಶಾತ್ ಇಲ್ಲಿ ಜೀವಹಾನಿ ಅಥವಾ ಭಾರೀ ಪ್ರಮಾಣದ ಆಸ್ತಿ ಹಾನಿ ಸಂಭವಿಸಲಿಲ್ಲ. ಭೌತಿಕವಾದ ಹಾನಿಗಿಂತ ಭಾವನಾತ್ಮಕವಾದ ಹಾನಿಯೇ ಹೆಚ್ಚಾಗಿತ್ತು. ಕಾನೂನನ್ನು ಕೈಗೆತ್ತಿಕೊಂಡ ಎಲ್ಲರ ಮೇಲೆ ಕಾನೂನು ಕ್ರಮ ಜರಗಿಸಬೇಕು.

ಈ ವಾಸ್ತವವನ್ನು ಅರಿಯದ ಅನೇಕ ರಾಷ್ಟ್ರೀಯ-ರಾಜ್ಯ ಇತ್ಯಾದಿ ಬಿರುದಾಂಕಿತ ನಾಯಕರು ಈಗ ಮಂಗಳೂರನ್ನು ತಮ್ಮ ಪ್ರವಾಸೀತಾಣ ವನ್ನಾಗಿ ಮಾಡಿಕೊಂಡಿದ್ದಾರೆ. ಸತ್ಯಸಂಗತಿ ಶೋಧಿಸಲು ಎಂದು ಬರುತ್ತಿರುವವರು ಕಣ್ಣು ಮತ್ತು ಕಿವಿಗಳನ್ನು ಮುಚ್ಚಿಕೊಂಡ ಸ್ಥಿತಿಯಲ್ಲಿ ತಿರುಗಾಟ ನಡೆಸಿದ್ದಾರೆ. ಓಲೈಕೆಯ ಭರಾಟೆಯಲ್ಲಿ ವಾಸ್ತವಗಳನ್ನು ತಿಳಿದುಕೊಳ್ಳದೆ ಉರಿಯುವ ಬೆಂಕಿಗೆ ತುಪ್ಪ ಹಾಕುವ ಸನ್ನಾಹದಿಂದಲೇ ಬಂದಿದ್ದಾರೆ. ಕರಾವಳಿಯ ಅದೃಷ್ಟದಿಂದಾಗಿ ಈ ಮಹನೀಯರು ಬರುವುದಕ್ಕೆ ಮೊದಲೇ ಇಲ್ಲಿ ಅಗ್ನಿಶಮನಗೊಂಡಿದೆ. ಏಕೆಂದರೆ, ಈ ಕರಾವಳಿಯ ಜಿಲ್ಲೆಗಳು ರೂಪು ಗೊಂಡಿ ರುವುದು ಸರ್ವ ಜನಾಂಗಗಳಿಂದ, ಸರ್ವರ ಕೊಡುಗೆಗಳಿಂದ.

ಚುನಾವಣೆಯ ದೃಷ್ಟಿ ?
ಲೋಕಸಭಾ ಚುನಾವಣೆಯು ಸಮೀಪಿಸುತ್ತಿದೆ. ಆದ್ದರಿಂದಲೇ ವಿವಿಧ ರಾಜಕೀಯ ಪಕ್ಷಗಳವರು ಇಲ್ಲಿ ಮೊಸಳೆ ಕಣ್ಣೀರು ಸುರಿಸಲು ಧಾವಿಸುತ್ತಿದ್ದಾರೆ ಅನ್ನುವುದು ಸ್ಪಷ್ಟ. ಇಲ್ಲಿಯ ಜನ ಅದನ್ನು ಅರಿತವರೇ ಆಗಿದ್ದಾರೆ.

ಇಲ್ಲಿಯ ಸಮಸ್ಯೆಗಳ ಪರಿಹಾರವನ್ನು ಇಲ್ಲಿನವರೇ ರೂಪಿಸಿಕೊಳ್ಳಲು ಶಕ್ತರಿದ್ದಾರೆ. ಲೋಕಸಭೆಗೆ ಓರ್ವ ಸ್ಪೀಕರ್, ಕೇಂದ್ರ ಸರಕಾರಕ್ಕೆ ಏಳು ಮಂದಿ ಮಹತ್ವದ ಖಾತೆಗಳ ಸಚಿವರು, ಕರ್ನಾಟಕಕ್ಕೆ ಓರ್ವ ಮುಖ್ಯಮಂತ್ರಿ, ಅನೇಕಾನೇಕ ಸಚಿವರನ್ನು ನೀಡಿದ ಜಿಲ್ಲೆ ಇದು. ಇಲ್ಲಿಯ ಸೂಕ್ಷ್ಮಗಳನ್ನು ಅವರು ಬಲ್ಲವರು. ಇಲ್ಲಿಯ ಜನಪ್ರತಿನಿಧಿಗಳಲ್ಲಿ ಈಗಲೂ ಕೇಂದ್ರ-ರಾಜ್ಯಗಳ ಸಚಿವರುಗಳಿದ್ದಾರೆ. ರಾಜಕೀಯ ಪರಿಹಾರವನ್ನು ಒದಗಿಸುವ ಸಾಮರ್ಥ್ಯ ಅವರಿಗಿದೆ.

ಎಲ್ಲಿಂದಲೋ ಬಂದವರು !
ಈಗ ಸಮಸ್ಯೆಯನ್ನು ಉಂಟು ಮಾಡುತ್ತಿರುವವರು ಎಲ್ಲಿಂದಲೋ ಬಂದವರು. ಈ ರೀತಿ ಬರುತ್ತಿರುವವರೇ ಈಗ ಶಾಂತಿ ಪ್ರಕ್ರಿಯೆಗೆ ಒಂದಿಷ್ಟು ತೊಡಕುಂಟು ಮಾಡುತ್ತಿದ್ದಾರೆ ಅನ್ನುವುದನ್ನು ಗಮನಿಸಬಹುದಾಗಿದೆ.

ಪರಿಹಾರ ನೀಡಲು, ಕಾನೂನು ಕ್ರಮ ಕೈಗೊಳ್ಳಲು ಸರಕಾರವಿದೆ. ಸರಕಾರ ಆ ನಿಟ್ಟಿನಲ್ಲಿ ಸ್ಪಂದಿಸುತ್ತಿದೆ. ಆ ಕುರಿತು ಲೋಪವಿದ್ದರೆ, ಶಾಸನಸಭೆಗಳಲ್ಲಿ ಮಾತನಾಡಬೇಕಾದವರು ಇಲ್ಲಿ ಬಂದು ರಾಡಿ ಎಬ್ಬಿಸುವುದೇಕೆ? ಮತ್ತಷ್ಟು ಗೊಂದಲಗಳನ್ನು ಉಂಟು ಮಾಡುವುದೇಕೆ?

ಮಂಗಳವಾರ ಭೇಟಿ ನೀಡಲು ಬಂದ ನಾಯಕರೋರ್ವರು ಸಾರ್ವಜನಿಕರಿಂದ ಮುತ್ತಿಗೆ ಎದುರಿಸಬೇಕಾಯಿತು. ಅವರು ಪಕ್ಷಪಾತದ ಧೋರಣೆ ಅನುಸರಿಸಿದರು. ಕೆಲವರ ಅಹವಾಲು ಮಾತ್ರ ಕೇಳಿದರು. ಇತರರನ್ನು ನೋಡಲು ಕೂಡ ನಿರಾಕರಿಸಿದರು. ಹಾಗಿದ್ದರೆ, ಇಂತಹ ಭೇಟಿ ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆಯನ್ನು ಅವರು ಎದುರಿಸ ಬೇಕಾಯಿತು. ಆದ್ದರಿಂದ, ಆ ನಾಯಕರ ವರ್ತನೆ ಪ್ರಜಾತಾಂತ್ರಿಕ ವ್ಯವಸ್ಥೆಗೆ ಪೂರಕವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತಿದೆ. ಉಸ್ತುವಾರಿ ಸಚಿವರ ನೇತೃತ್ವದಲ್ಲಿಂದು ಶಾಂತಿ ಸಭೆ ನಡೆದಿದೆ. ಸೆ. 14 ಮತ್ತು 15ರ ಘಟನೆಗಳು ಪುನರಾವರ್ತನೆ ಆಗಬಾರದು ಎಂಬ ಕಳಕಳಿ ವ್ಯಕ್ತವಾಗಿದೆ. ನಡೆದುಹೋದ ದುರ್ಘಟನೆಯನ್ನು ಕೆಟ್ಟ ಕನಸು ಎಂದು ತೊಡೆದು ಹಾಕಲು ಸಾಧ್ಯವಿಲ್ಲವೇ?

Courtesy: Udayavani, reproduced from Gulfkannadiga

===================================

Amicable settlement of issues: Local problems settled locally, much to the dismay of "those fishing in troubled waters"


Sunday, August 17, 2008

ಸಿರಿಮನೆಯಲ್ಲಿ ಹೋದ ಮಾನ...ಅನಧಿಕೃತ ಬ್ಯಾನರ್ ಕಟ್ಟಿದರೆ ವಾಪಸ್ ಬರುವುದೇ?

ಸುಂದರ ಸಿರಿಮನೆ ಜಲಪಾತ (ಚಿತ್ರ ಕೃಪೆ: http://gangoftrekkers.blogspot.com/)
ಕಿಗ್ಗ ಘಟನೆ...ಎಲ್ಲೆಡೆ ಆಕ್ರೋಶ! ಒಂದು ಸುದ್ದಿ ಸಂಗ್ರಹ...
==========================
ವರದಿ1
ನೆರೆ ಪರಿಹಾರ, ಕರಾವಳಿ ಅಭಿವೃದ್ದಿ ಸಭೆ, ಶಾಲಾ ಮಕ್ಕಳ ಬಸ್ ದುರಂತ ಸ್ಥಳಕ್ಕೆ ಭೇಟಿ, ಸಂತ್ರಸ್ತರಿಗೆ ಸಾಂತ್ವನ ...ಇದೆಲ್ಲ ಮಾನವೀಯ ಕಾರ್ಯಕ್ರಮಗಳಲ್ಲಿ ತೊಡಗಿರುವಾಗ...ಬೀದಿರಂಪ ಮಾಡುತ್ತಿರುವ ಕೆಲ ಸಂಘಟನೆಗಳಿಗೆ ಇವು ಯಾವುದೇ ವಿಷಯಗಳು ಕಣ್ಣಿಗೆ ಕಾಣದಿರುವುದು ವಿಶೇಷ! ಅದಲ್ಲದೆ ಗೃಹ ಸಚಿವರು ಇವರಿಗೆ ಫೋನ್ ನಲ್ಲಿ ಮಾತಿಗೆ ಸಿಗಲಿಲ್ಲ ಎಂದು ಏನೇನೋ ಪ್ರಲಾಪಿಸಿ ದಿನಕ್ಕೊಂದು ಬ್ಯಾನರ್ ನೇತು ಹಾಕಿದರೆ ಜನ ನಂಬುವರೇ? (ಹೇಳಿ ಕೇಳಿ ಕುಡಿದು ಗಲಾಟೆ ಮಾಡಿದವರಲ್ಲವೇ ಎಂದು ಜನರು ಆಡಿಕೊಳ್ಳುತ್ತಿದ್ದಾರೆ!) ಅಷ್ಟಕ್ಕೂ ಕಿಗ್ಗದಲ್ಲಿ ರಂಪ ಮಾಡಿ ಪೊಲೀಸರೊಂದಿಗೆ ಜಗಳವಾಡಲು , ಊರಿನ ಜನರಿಗೆ ಕಿರುಕುಳ ನೀಡುವಾಗ ಎಲ್ಲಿತ್ತು ಇವರ ಮಾನವತೆ?ಸಚಿವರ ಕಾರ್ಯಕ್ರಮ ವರದಿ ನೋಡಿ...(click on photo for report)
ಇಲ್ಲಿ ಅವರು ನಿದ್ರಿಸಿದಂತೆ ಕಾಣುತ್ತದೆಯೇ?
============================================
ವರದಿ 2:
ನ್ಯಾಯಾಲಯದ ಆವರಣದೊಳಗೆ ಮತ್ತು ಹೊರಗಿನ ಆವರಣ ಗೋಡೆಯಲ್ಲಿ ವಕೀಲರು ನ್ಯಾಯ ಸಿಕ್ಕಿಲ್ಲವೆ೦ಬ ಕಾರಣಕ್ಕಾಗಿ ರಾಜ್ಯದ ಗ್ರಹ ಸಚಿವರ ವಿರುದ್ದ ಟೀಕಿಸಿ ಬರೆದ ಬ್ಯಾನರ್ ಗಳನ್ನು ಹಾಕಿರುವುದರಿ೦ದ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಮಾತ್ರವಲ್ಲದೇ ಯಾರೋ ಮಾಡಿರ ಬಹುದಾದ ತಪ್ಪಿಗಾಗಿ ಗ್ರಹ ಸಚಿವರ ಮೇಲೆ ಆರೋಪವನ್ನು ಹಾಕುತ್ತಿರುವುದನ್ನು ಸಹ ಸಾರ್ವಜನಿಕರು ತೀವ್ರವಾಗಿ ವಿರೋಧವನ್ನು ವ್ಯಕ್ತ ಪಡಿಸಿದ್ದಾರಲ್ಲದೇ ಈ ಬಗ್ಗೆ ನಗರ ಸಭೆಗೆ ದೂರನ್ನು ನೀಡಿರುವುದರಿ೦ದಾಗಿ ಶನಿವಾರ ಸ೦ಜೆಯ ಸಮಯದಲ್ಲಿ ಉಡುಪಿ ನಗರ ಸಭೆಯ ಪ್ರಭಾರ ಪೌರಾಯುಕ್ತರಾದ ಕ್ಯಾಪ್ಟ್ನ್ ಸ್ವಾಮಿಯವರು ತಮ್ಮ ಸಿಬ್ಬ೦ದಿಗಳೊ೦ದಿಗೆ ನ್ಯಾಯಾಲಯದ ಎದುರು ಗಡೆಯಲ್ಲಿ ಪ್ರತಿಭಟನೆಯಲ್ಲಿ ನಿರತರಾದ ವಕೀಲರಲ್ಲಿ ಸಾರ್ವಜನಿಕ ಸ್ಥಳವಾದ ನ್ಯಾಯಾಲಯದ ಆವರಣದಲ್ಲಿ ಗೋಡೆಯಲ್ಲಿ ಹಾಕಲ್ಪಟ್ಟ ಬ್ಯಾನರ್ ತೆಗೆಯುವ೦ತೆ 2 ಬಾರಿ ಮನವಿ ಮಾಡಿದರಾದರೂ ಇವರ ಮನವಿಗೆ ಒಪ್ಪ೦ದ ವಕೀಲರು ಇವರೊ೦ದಿಗೆ ಮಾತಿಗಿಳಿದರು...ಪೂರ್ತಿ ವರದಿ ಓದಿ...
ಅನಧಿಕೃತ ಅವಹೇಳನಕಾರಿ ಬ್ಯಾನರ್ ನೇತಾಡಿಸಿ , ಮುಖ ಭಂಗ ಆದ ಮೇಲೆ ಬ್ಯಾನರ್ ಕಿತ್ತ ರು
ಕೊನೆ ಹನಿ: ಇಷ್ಟಾದರೂ ತೆಗೆಯಲ್ಪಟ್ಟ ಬ್ಯಾನರ್ ಗಳು ಇಂದು ಪುನಃ ಪ್ರತ್ಯಕ್ಷ!
==========================================
ವರದಿ 3
When Freedom Invades Freedom...
The incident of anti-naxal-force policemen beating up advocates at Sirimane near Kigga and Sindodi has been widely reported in the media. 13 lawyers (lucky number) who were on a leisure trip to Sirimane falls were allegedly beaten up by anti-naxal police. There was such a lot of hullabaloo, mainly because lawyers, considered to be guardians of justice, were involved in the incident.
There is no need to go into the explicit details of judging who is right or wrong and other trivia involving the incident. But what is disquieting and condemnable is the decision of Udupi lawyers to boycott court proceedings in protest against the alleged assault on their colleagues.
By boycotting court proceedings the common populace was put into great privation by our lawyers who did not think it fit to consider the public inconvenience of their action. Now the government has ordered a probe to look into the assault on lawyers and this probe will be conducted at the cost of tax payer’s money. It is another matter that the idiosyncrasies of this group of 13 were brought to the fore by the villages that had borne the impact of their misdemeanor.
Full report: http://www.daijiworld.com/chan/exclusive_arch.asp?ex_id=946
=================================
ವರದಿ 4
ಈ ಬಾರಿ ಕುಡುಕರಿಗೆ ಧರಣಿ ಮಾಡಲು ಅವಕಾಶ ಕೊಡಬೇಡಿ...ಕಿಗ್ಗ ಗ್ರಾಮಸ್ತರು...
(ಉದಯವಾಣಿ ವರದಿ)

ಮೊದಲ ವರದಿ...

ಒಳ‌ಉಡು ಪಿನಲ್ಲಿದ್ದು , ಮದ್ಯಪಾನ ಮಾಡುತ್ತಾ ಬಂದುದಲ್ಲದೆ ಕಿಗ್ಗ ಜನರೊಂದಿಗೆ ಅಸಭ್ಯ ವರ್ತನೆ ತೋರಿದರು

Thursday, August 14, 2008

ಇಂದಿನ ಕೊನೆ ಮಾತು...

ಅಪಘಾತಗಳನ್ನು ಯಾರೂ ಬೇಕೆಂದು ಮಾಡುವುದಿಲ್ಲ...ಆದರೂ ಶಾಲಾ ಬಸ್ ನದಿಗೆ ಬೀಳಲು ಶಾಲೆಗೆ ರಜೆ ಕೊಡದೆ ಇದ್ದುದೇ ಕಾರಣ ಎಂದು ಬರೆದು, ಜಿಲ್ಲಾ ಆಡಳಿತವನ್ನು ಗೇಲಿ ಮಾಡಿ ಬರೆವ "ಕರಾವಳಿಯ ಸುಂದರ ಪತ್ರಿಕೆಯ" ವರದಿಗಾರರ ಬುದ್ಧಿಗೆ ಏನು ಅನ್ನಬೇಕು?
ನೆರೆ ಪರಿಹಾರ, ಕರಾವಳಿ ಅಭಿವೃದ್ದಿ ಸಭೆ, ಶಾಲಾ ಮಕ್ಕಳ ಬಸ್ ದುರಂತ ಸ್ಥಳಕ್ಕೆ ಭೇಟಿ, ಸಂತ್ರಸ್ತರಿಗೆ ಸಾಂತ್ವನ ...ಇದೆಲ್ಲ ಮಾನವೀಯ ಕಾರ್ಯಕ್ರಮಗಳಲ್ಲಿ ತೊಡಗಿರುವಾಗ...ಬೀದಿರಂಪ ಮಾಡುತ್ತಿರುವ ಕೆಲ ಸಂಘಟನೆಗಳಿಗೆ ಇವು ಯಾವುದೇ ವಿಷಯಗಳು ಕಣ್ಣಿಗೆ ಕಾಣದಿರುವುದು ವಿಶೇಷ!

Thursday, July 10, 2008

News 10.07.2008

(ಸುದ್ದಿ : ಉದಯವಾಣಿ)

Wednesday, July 9, 2008

Datta Peetha inspected: ದತ್ತ ಪೀಠ ಗುಹೆ ಕುಸಿತ : ರಾಜ್ಯ ಸರಕಾರದ ಪರಿವೀಕ್ಷಣೆ

Ministers inspect work on Datta PeethaCHIKMAGALUR: Ministers V.S. Acharya, Shoba Karandlaje, K.S. Eshwarappaand S.N. Krishnaiah Shetty visited the Dattatreya Peetha atBababudangiri on Tuesday to inspect the repair work on the roof of theshrine, which partially collapsed in heavy rain on June 29.Dr. Acharya told presspersons that Chief Minister B.S. Yeddyurappa haddirected them to visit the pilgrimage centre and submit a report. Hedeclined to answer questions about the Government's stand on thelongstanding demands of the Sangh Parivar on the Datta Peetha.
(ವಿಜಯ ಕರ್ನಾಟಕ)
(ಉದಯವಾಣಿ ವರದಿ) (ಸಂಯುಕ್ತ ಕರ್ನಾಟಕ)



(ಪ್ರಜಾವಾಣಿ ಚಿತ್ರ)





Saturday, July 5, 2008

05.07.2008; News Scan

(Pic from Ravi`s picassa album, http://picasaweb.google.com/ravim7/May20thKudremukh)
Yesterdays post http://drvsacharya.blogspot.com/2008/07/mines-tourism-knowledge-is-power.html has a good number of hits, comments...keep sending those constructive comments...ಕುದುರೆಮುಖದ ಬಗ್ಗೆ ನಿನ್ನೆಯ ಪೋಸ್ಟ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ...ಪರಿಸರದಂತಹ ಸೂಕ್ಷ್ಮ ವಿಷಯ ಕೆಲವೇ ಪಟ್ಟಭದ್ರ ಬಾಡಿಗೆ ಹೋರಾಟಗಾರರ/ ಬರಹಗಾರರ ಸೊತ್ತು ಅಲ್ಲ ಎಂದು ಮನವರಿಕೆಯಾಗಿದೆ ! (ಅಸಂಖ್ಯ ಚಾರಣಿಗ ರು ಬರೆದ ಪತ್ರಗಳೇ ಇದಕೆ ಸಾಕ್ಷಿ)


=========


(ಸುದ್ದಿ : ಉದಯವಾಣಿ )
(ಕೃಪೆ: ವಿಜಯ ಕರ್ನಾಟಕ )

Friday, July 4, 2008

Mines tourism: Knowledge is power


ಪರಿಸರ ಪ್ರೇಮ ಬುದ್ದಿ ಜೀವಿಗಳಿಗೆ ಹಾಗೂ ಪರಿಸರ ವಾದಿಗಳಿಗೆ ಮಾತ್ರ ಅಲ್ಲ
: ಟೂರಿಸಂ ವಿಷಯ ಅರಿಯದೇ ಪ್ರಲಾಪಿಸುವುದೂ ಸರಿಯಲ್ಲ! ಟೂರಿಸಂ ಅಂದರೆ ರೆಸಾರ್ಟ್ ಮಾತ್ರ ಅಲ್ಲ..ಇಕೋ ಟೂರಿಸಂ ಕೂಡ ಇದೆಯೆಂದು ಇವರಿಗೇಕೆ ತಿಳಿದಿಲ್ಲ? (ಉದಯವಾಣಿ- ಬರಹ /ವಿಜಯ ಕರ್ನಾಟಕ-ಓದುಗರ ಪತ್ರ?)

ಕುದುರೆಮುಖದಲ್ಲಿ ಈಗಲೇ ಈಜುಕೊಳ ರೆಸಾರ್ಟ್ ಇತ್ಯಾದಿ ಇವೆ...ಹೊಸದಾಗಿ ಏನನ್ನು ಕಟ್ಟಬೇಕಾಗಿಲ್ಲ..ದೇವಳ , ಕಟ್ಟಡಗಳು, ವಸತಿ ಗ್ರಹಗಳು, ರೆಸಾರ್ಟ್, ಟೆನ್ನಿಸ್ ಕೋರ್ಟ್ , ಆಸ್ಪತ್ರೆ , ಸುಸಜ್ಜಿತ ಶಾಲೆ (ಒಂದೊಮ್ಮೆ ಕೇಂದ್ರೀಯ ವಿದ್ಯಾಲಯ ) ಉದ್ಯಾನ ಎಲ್ಲ ಇವೆ. ಈಗ ಚಿಂತನೆ ನಡೆದಿರುವುದು ಇವೆಲ್ಲಗಳ ಸದುಪಯೋಗ... ಇಕೋ ಟೂರಿಸಂ, ಮೆಡಿಕಲ್ ಟೂರಿಸಂ ಮಾಡಲು ಉತ್ತಮ ಅವಕಾಶ...ಇಕೋ ಟೂರಿಸಂ ಬಗ್ಗೆ ತಿಳಿಯದೆ,ಕುದುರೆಮುಖದ ಬಗ್ಗೆ ಮಾಹಿತಿ ಇಲ್ಲದೆ, ಯಾರೋ ಯಾವಾಗಲೋ ಬರೆದ ಧಾಟಿಯಲ್ಲಿ ಲೇಖನ ಬರೆದರೆ ಇವರ ಅಜ್ಞಾನದ ಬಗ್ಗೆ ನಮಗೆ ಕನಿಕರವಿದೆ... ಅಷ್ಟಾಗಿ ಎಲ್ಲ ಓದುಗರಲ್ಲಿ ನಮ್ಮ ವಿನಂತಿ : ಒಮ್ಮೆ ಕುದುರೆಮುಖಕ್ಕೆ ಭೇಟಿ ಕೊಡಿ...ನಿಮ್ಮ ಅನಿಸಿಕೆ ನಮಗೆ ತಿಳಿಸಿ...
=====

ಇದನ್ನೂ ಓದಿ...
"It is being contemplated to develop mine tourism in Kudremukh region.The KIOCL facility is still in pristine condition and can be utilisedfor educating the youth and children on how the mining activities are carried out" (here is some info on Mine Tourism)Dr.V.S.Acharya visited Mines City in 2002 while on a personal trip toMalaysia (background lake was once a tin mine. Building in thebackground is Palace of Golden Horses - part of Mines City)
Mine tourism is nothing new in many parts of the world. It is a great way to preserve existing ecology (and mend any earlier damages) while benefiting local economy by way of eco-tourism. Mines Resort City in Kuala Lumpur, Malaysia is a good example of this(Wikipedia link:http://en.wikipedia.org/wiki/The_MINES) Once the world's largest open cast tin mine covering 1300 acres, MinesCity is now one of Malaysia's most popular tourist attractions after being developed as a destination for International Conferences and as a high end resort. Mine workers and their descendants who wereunemployed due to closure of the mine are employed by numerous business establishments in Mines City. Some of the events hosted byMines City include G-15 Summit, ASEAN Summit, APEC conferences.Dr.V.S.Acharya visited Mines City in 2002 while on a personal trip toMalaysia (background lake was once a tin mine. Building in the background is Palace of Golden Horses - part of Mines City)

======

ಕುದುರೆಮುಖದಲ್ಲಿ ಟ್ರೆಕ್ಕಿಂಗ್ : http://www.karnatakawildernesstourism.org/Trekking_opp_in/Kudremukh.htm
ಹಕ್ಕಿ ಪ್ರಿಯರಿಗೆ / ornithologists...please visit: http://www.indiabirds.com/HotSpots/FullDetails.asp?spotid=277&page=1
===
more on mining & tourism around the world: ಪ್ರಪಂಚದ ಗಣಿಗಳ ಪ್ರವಾಸೋದ್ಯಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇವನ್ನು ನೋಡಿ...

Monday, June 23, 2008

ಸಾವಿನಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್ಸ್...Political mileage out of personal tragedy? Updated24.06.2008

ಮಲ್ಪೆಯ ಯುವ ಕಾಂಗ್ರೆಸ್ಸ್ ನಾಯಕರು ಇತರರ ಮನೆಯ ದೋಸೆಯಲ್ಲಿ ತೂತು ಹುಡುಕುವ ಮೊದಲು ತಮ್ಮ ಮನೆಯ ಕಾವಲಿಯ ತೂತು ನೋಡಲಿ ...ಮುಂದೆ ಓದಿ ...
(ಸುದ್ದಿ:ಉದಯವಾಣಿ)
(cartoons courtesy: Harini/ http://www.daijworld.com/)

Oscar/ Poojari/ Pramod...all are in the race to take political mileage out of a personal tragedy...(when they have other things like price rise, LPG shortage, terrorism, chinese invasion in Sikkim to worry about)
God save our country from such leaders...
(one of them says...one who can not keep his house in order...what can he do for constituency...they have conviniently forgotten that, when their government was ruling they could not protect their own leaders- Indira Gandhi/ Rajiv Gandhi!)
read more in...
================================
More bloggers/ readers have written about politicization of a personal tragedy...read on...
2008/06/24
Politics encroaching personal life in Udupi
ಇ೦ದು ಮು೦ಜಾನೆ ನನ್ನ ಗಣಕ ಯ೦ತ್ರದಲ್ಲ ಮೂಲೆಯಲ್ಲಿ ಕಾದುಕುಳಿತ೦ತಹಾ forwarded e Mail ಒ೦ದನ್ನು ತೆರೆದು ನೋಡಿದಾಗ ಅದು ಶ್ರಿಯುತ ರಘುಪತಿ ಭಟ್ಟರ ಮನದಾಳದ ನುಡಿಗಳು. ದುಃಖದ ಮಡುವಿನಲ್ಲಿರುವ ಅವರ ನುಡಿಗಳು ನಿಜಕ್ಕು ಮನಕರಗಿಸುವ೦ತಹದ್ದು. ಇದರ ಬಗ್ಗೆ ನನ್ನದೊ೦ದು ಸಣ್ಣ ಅನಿಸಿಕೆ.
ಕೊನೆಗೂ ಮೌನ ಮುರಿದ ಉಡುಪಿ ಶಾಶಕರು ತಮ್ಮ ಮನದಾಳದ ನೋವನ್ನು ತೆರೆದೇ ಬಿಟ್ಟಿದ್ದಾರೆ, ನಿಜವಾದ ಮಾತನ್ನೇ ಆಡಿದ್ಧಾರೆ. ತು೦ಬ ದಿನಗಳಿ೦ದ ಮುದುಡಿಕೊ೦ಡಿದ್ಧ ಮೌನ ಮಾತನಾಡಿದೆ. ಸದಾ ಜನರ ಸೇವೆಯಲ್ಲೇ ನಿರತರಾಗಿದ್ಧ ಇವರಿಗೆ ನಿಜಕ್ಕೂ ಪತ್ರಿಕೆಗಳ ಸುಳ್ಳು gossip ಗಳು, ಮಿತ್ರ ಪಕ್ಷಗಳ ಮನನೋಯಿಸುವ೦ತಹ ಧರಣಿಗಳು, ಹರತಾಳಗಳು, ಬಾಯಿಗೆ ತೋಚಿದ೦ತ, ಮನಸ್ಸಿಗೇ ಬ೦ದ೦ತೆ ಬರೆಯುವ, ಬುದ್ದಿವ೦ತ ಉದುಪಿ ಜನರ ಆಲೋಚನೆಗಳನ್ನು ಬುಡಮೇಲಾಗಿಸುವ ಕೆಲವೊ೦ದು ಅನಾಮಧೇಯ ಹಣಭಕ್ಷಕ ಪತ್ರಿಕೆಗಳ ಶೋಚನೀಯ ಬರಹಗಳು ಉಡುಪಿ ಜನತೆಗೂ ಸೇರಿದ೦ತೆ ಶಾಶಕರಿಗೂ ನಿಜಕ್ಕೂ ಬೇಸರ ತ೦ದಿರಬೇಕು. ಈ ಓ೦ದು ದುಃ ಖದ ಮಡುವಿನಲ್ಲಿ ಮುಳುಗಿರುವ ಶಾಶಕರಿಗೆ ಆತ್ಮ ಸ್ಥಿರತೆಯನ್ನ, ಧೈರ್ಯವನ್ನ ನಿಡುವ ಬದಲಾಗಿ, ತಮ್ಮ ಮನೆಯ ದೋಸೆಯಲ್ಲೂ ತೂತಿದೆ ಏ೦ಬುದನ್ನೇ ತಿಳಿಯದ ಕೆಲವು ಮಿತ್ರಪಕ್ಷಗಳ ನಾಯಕರು ಹರತಾಳ, ಧರಣಿಯನ್ನು ಆರ೦ಭಿಸಿದ್ದು ನಿಜಕ್ಕೂ ಒ೦ದು ಶೋಚನೀಯ ಬೆಳವಣಿಗೆ.
ಈ ಏಲ್ಲಾ ಕ್ಶುಲ್ಲಕ ವಿಚಾರಗಳನ್ನು ಬಿಟ್ಟು, ಬಹುಶಃ ಇತರ ಪಕ್ಷಗಳು ಜನರ ಮುಖ್ಯ ಮೂಲಭೂತ ಸಮಸ್ಯೆಗಳಾದ ಬೆಲೆ ಏರಿಕೆ, ವಿದ್ಯುತ್ , ನೀರು, ರಸ್ತೆ, ನಿರುದ್ಯೋಗ ಸಮಸ್ಯೆಗಳತ್ತ ಕಿ೦ಚಿತ್ ಗಮನಹರಿಸಿದ್ದರೂ ಜನರ ವಿಶ್ವಾಸವನ್ನು, ಬೆ೦ಬಲವನ್ನು ಗಳಿಸುವುದರಲ್ಲಿ ಏರಡು ಮಾತಿರಲಿಕ್ಕಿಲ್ಲ. ಅದೆಲ್ಲ ಬಿಟ್ಟು ಗಾಯದ ಮೇಲೆ ಬರೆ ಏಳೆಯುವ ಕಟುಕ ರಾಜಕೀಯ ಉದುಪಿಯ ಜನರಿಗೆ ಸಭ್ಯವೇ?
ಹಿ೦ದು ಮು೦ದು ನೋಡದೆ ವಯುಕ್ತಿಕ ವಿಚಾರದಲ್ಲಿ ಮನಬ೦ದತೆ ಮಾತನಾಡುವುದು ನಿಜಕ್ಕೂ ತಪ್ಪು, ಇದು ಓ೦ದು ಸ೦ಪೂರ್ಣ ವಯುಕ್ತಿಕ ವಿಷಯ, ನಿಜವೆ೦ದರೆ ಈವರೆಗೇ ಯಾರಿ೦ದಲೂ ಅಭಿವ್ರದ್ಧಿಯನ್ನು ಕಾಣದ ಶ್ರಿ ಕೃಸ್ಣನ ನೆಲೆಯಾಗಿರುವ ಉಡುಪಿಯ ಸರ್ವತೋಮುಖ ಏಳಿಗೆಗ ಶ್ರೀಯುತ ರಘುಪತಿ ಭಟ್ಟರೇ ಕಾರಣ ಏ೦ದು ಉದುಪಿಯ ಜನರು ಮರೆಯಲು ಸಾಧ್ಯವೇ ಇಲ್ಲ. ಸಾಧನೆಯ ಬಗ್ಗೆ ಅಲ್ಪವೂ ಜ್ನಾನವಿಲ್ಲದೆ, ಬೇರೆಯವರ ಸಾಧನೆಯ ಬಗ್ಗ್ಗೆಹೊಟ್ಟೆ ಕಿಚನಿ೦ದ ಉರಿಯುತ್ತಾ ವಯುಕ್ತಿಕ ವಿಚಾರಕ್ಕೆ ರಾಜಕೀಯ ರೂಪವನ್ನು ಕೊಡುವ ಹೊಲಸು ರಾಜಕೀಯ ಉದುಪಿಯ ಸರ್ವ ಜನತೆಗೆ ಬೇಸರ ತ೦ದದ್ದ೦ತೂ ಅಕ್ಷರಶಃ ನಿಜ.
ಪ್ರೀತಿಯ ಮಡದಿಯ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವ೦ತನು ಶ್ರೀಯುತರಿಗೆ ದಯಪಾಲಿಸಲಿ....
ಅವಿನಾಶ್, ಉಡುಪಿ
==========================
Mr Raghupathi Bhats letter to the editor, Vijaya Karnataka (click to read)

Raghupathi Bhats open letter ...English version in...http://www.daijiworld.com/news/news_disp.asp?n_id=48122&n_tit=I%20am%20Pained%20to%20See%20My%20Wife%27s%20Death%20Making%20Headlines%20%2D%20Ragupathi%20Bhat